ಉಡುಪಿ – ದೈವದ ನುಡಿಯಂತೆ ಆಗಸಕ್ಕೆ ಚಿಮ್ಮಿದ ನೀರು…!!
ಕರಾವಳಿಯಲ್ಲಿ ದೈವದ ಪವಾಡಗಳು ನಡೆಯುತ್ತಲೇ ಇರುತ್ತವೆ. ಅದೇ ರೀತಿ ದೈವ ಸಾನಿಧ್ಯಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದ್ದು, ಉಡುಪಿಯ ಕಸ್ತೂರ್ಬಾ ನಗರ ಚಿಪ್ಪಾಡಿಯಲ್ಲಿ ಬಬ್ಬುಸ್ವಾಮಿ ಅಣತಿಯಂತೆ ದೈವಸ್ಥಾನದ ನೀರಿನ ಸಮಸ್ಯೆ ಮುಕ್ತಿ ಸಿಕ್ಕಿದೆ. ಶ್ರೀ ದೈವರಾಜ ಬಬ್ಬುಸ್ವಾಮಿ ಕಮಿಟಿ ದೈವ ಸ್ಥಾನದ ನೀರಿನ ಸಮಸ್ಯೆಗಾಗಿ ದರ್ಶನ ಸೇವೆ ನಡೆಸಿದ್ದರು. ದರ್ಶನ ಸೇವೆಯ ಸಂದರ್ಭದಲ್ಲಿ ಬಬ್ಬುಸ್ವಾಮಿ ನೀರಿನ ಸೆಲೆಯಿರುವ ಜಾಗ ತೋರಿಸಿದ್ದರು. ದೈವ ತೋರಿಸಿದ ಜಾಗದಲ್ಲಿ ಬೋರ್ ವೆಲ್ ಕೊರೆದಾಗ ಜೀವಜಲ ಆಗಸದ ಎತ್ತರಕ್ಕೆ ಚಿಮ್ಮಿದೆ. ಸದ್ಯ ದೈವದ ಕಾರಣೀಕತೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

Post a Comment