".

Header Ads

ಮಹಾರಾಷ್ಟ್ರದ ಏಕನಾಥ್‌ ಶಿಂಧೆ ನೇತೃತ್ವದಲ್ಲಿ : ಔರಂಗಾಬಾದ್‌ ಮತ್ತು ಒಸ್ಮಾನಾಬಾದ್‌ ನಗರಗಳ ಹೆಸರು ಬದಲಿಸಲು ಕೇಂದ್ರ ಒಪ್ಪಿಗೆ



ಶಿಂಧೆ ನೇತೃತ್ವದಲ್ಲಿ  ಮಹಾರಾಷ್ಟ್ರ ಸರ್ಕಾರ ಔರಂಗಾಬಾದ್‌ ಮತ್ತು ಒಸ್ಮಾನಾಬಾದ್‌ ನಗರಗಳ ಹೆಸರನ್ನು ಮರುನಾಮಕರಣ ಮಾಡಬೇಕೆಂದು ಕೇಂದ್ರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಗೃಹ ಮತ್ತು ವ್ಯವಹಾರ ಸಚಿವಾಲಯ ಅನುಮೋದಿಸಿದೆ. ಅಲ್ಲದೇ ಎರಡು ನಗರಗಳ ಹೆಸರು ಬದಲಾವಣೆಗೆ ತಮ್ಮ ಆಕ್ಷೇಪ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಹೀಗಾಗಿ ಇನ್ನು ಔರಂಗಾಬಾದ್‌ ನಗರ 'ಛತ್ರಪತಿ ಸಂಬಾಜಿ ನಗರ' ಎಂದೂ, ಒಸ್ಮಾನಾಬಾದ್‌ ನಗರವನ್ನು 'ಧಾರಾಶಿವ್‌ ನಗರ' ಎಂದೂ ಮರುನಾಮಕರಣ ಮಾಡಲಾಗಿದೆ.

ನಗರಗಳ ಹೆಸರನ್ನು ಬದಲಾವಣೆಗೆ ಕೇಂದ್ರ ಸರ್ಕಾರ ಸಮ್ಮತಿಸಿ ಬೆನಲ್ಲೇ ಟ್ವೀಟ್‌ ಮಾಡಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಈ ಕಾರ್ಯಕ್ಕೆ ಒಪ್ಪಿಗೆ ಸೂಚಿಸಿದ್ದಕ್ಕೆ ನರೇಂದ್ರ ಮೋದಿ, ಅಮಿತ್‌ ಶಾಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ. 

 

Powered by Blogger.