".

Header Ads

ವರ್ಲಿ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫಾಂಡೇಶನ್*ನ ಮಹಿಳಾ ವಿಭಾಗದ ಆಟಿದ ಕೂಟ ಕಾರ್ಯಕ್ರಮ,

ವರ್ಲಿ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫಾಂಡೇಶನ್*ನ  ಮಹಿಳಾ ವಿಭಾಗದ   ಆಟಿದ ಕೂಟ ಕಾರ್ಯಕ್ರಮ,

ವರ್ಷಕ್ಕೆ ಒಮ್ಮೆಯಾದರೂ. ಪೌಷ್ಟಿಕ ಅಂಶವಿರುವ ಆಹಾರವನ್ನು  ಸೇವಿಸುವ ಉದ್ದೇಶದೊಟ್ಟಿಗೆ   ಆಟಿದ ಕೂಟ: ರಮೇಶ್ ಗುರುಸ್ವಾಮಿ


ಚಿತ್ರ ವರದಿ : ದಿನೇಶ್ ಕುಲಾಲ್ 

ಮುಂಬೈ  ಅ 17.  ಉಪನಗರ ವರ್ಲಿ ಯಲ್ಲಿ ಪಡುಬಿದ್ರಿ  ಬೆಂಗ್ರೆ ರಮೇಶ್ ಗುರು ಸ್ವಾಮಿ ಅವರ ಮಾರ್ಗದರ್ಶನದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫಾಂಡೇಶನ್ ನ ಮಹಿಳಾ ವಿಭಾಗದ    ವತಿಯಿಂದ ಆಟಿದ ಕೂಟ ಕಾರ್ಯಕ್ರಮ  14ರಂದು ವರ್ಲಿಯ ಸಿದ್ದೇಶ್ವರ ದೇವಸ್ಥಾನದ ನಡೆಯಿತು,,
 ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಅಪ್ಪಾಜಿ ಬೀಡು ಫೌಂಡೇಶನ್ ಸಂಸ್ಥಾಪಕ ರಮೇಶ್ ಗುರುಸ್ವಾಮಿ ಯಾವರು ಆಶೀರ್ವಚನದ ಮಾತುಗಳನ್ನಾಡಿ ಆಟಿ ತಿಂಗಳ ಕಷ್ಟದ ದಿನಗಳು ಅಂದಿನ ಊಟ ಉಪಚಾರಗಳು ನಮಗೆ ಆರೋಗ್ಯವನ್ನು ನೀಡಿದೆ. ಇಂದಿನ  ಪದಾರ್ಥಗಳಲ್ಲಿ ಆರೋಗ್ಯವನ್ನು ಅದಗೆಟ್ಟುವ  ಅಂಶಗಳಿವೆ .ಆದ್ದರಿಂದ ವರ್ಷಕ್ಕೆ ಒಮ್ಮೆಯಾದರೂ. ಪೌಷ್ಟಿಕ ಅಂಶವಿರುವ ಆಹಾರವನ್ನು  ಸೇವಿಸುವ ಉದ್ದೇಶದೊಟ್ಟಿಗೆ ನಮ್ಮೆಲ್ಲರ ಒಗ್ಗಟ್ಟು ಮತ್ತು ಒಬ್ಬರನ್ನೊಬ್ಬರು ಸಂಬಂಧಗಳು ಗಟ್ಟಿಯಾಗಿ ಬೆಳೆಯುವುದಕ್ಕೆ ಆಟಿದ ಕೂಟ ಇದಾಗಿದೆ ಎಂದು ನುಡಿದ ಅವರು ಮಹಿಳಾ ವಿಭಾಗದ ಸ್ಥಾಪಕ ಕಾರ್ಯ ಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ದಿವಂಗತ ಲೀಲಾ ಶೇಖರ್ ಶೆಟ್ಟಿಯವರಿಗೆ ನುಡಿ ನಮನವನ್ನು ಸಲ್ಲಿಸಿ ಅವರ ಸೇವಾ ಕಾರ್ಯಗಳನ್ನು ನೆನಪಿಸಿಕೊಂಡರು.
     ರೇರೋಡಿನ ಅಯ್ಯಪ್ಪ ಭಕ್ತವೃಂದದ ಸಂಸ್ಥಾಪಕ ಸತೀಶ್ ಗುರುಸ್ವಾಮಿ ಆಶೀರ್ವಚನ ನೀಡಿ ಅಪ್ಪಾಜಿ ಬೀಡು ಧಾರ್ಮಿಕ ,ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಜನ ಮಾನಸದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಮಹಿಳಾ ವಿಭಾಗದ ಸ್ಥಾಪಕ ಕಾರ್ಯ ಧ್ಯಕ್ಷರಾಗಿರುವ ಲೀಲಾ ಶೆಟ್ಟರ್ಯವರು ಈ ಸಂಸ್ಥೆಯಲ್ಲಿ ಅಪಾರವಾದ ಸೇವೆಯನ್ನು ಮಾಡಿ ಭಗವಂತನ ಪಾದದಲ್ಲಿ ಲೀನವಾಗಿದ್ದಾರೆ, ಉತ್ತಮ ಕೆಲಸಗಳನ್ನು ಮಾಡುವ ಸೇವಕರನ್ನು ದೇವರು ಬೇಗ ಆತನ ಬಳಿ ಕರಿತ್ತಾರೆ , ನಮ್ಮನ್ನು ಅಗಲಿರುವ  ಲೀಲಾ ಶೆಟ್ಟಿಯವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ ಎಂದು ನುಡಿದರು,
 ಫೌಂಡೇಶನ್ ಆಡಳಿತ ಟ್ರಸ್ಟಿ ಶಾಂಭವಿ ರಮೇಶ್ ಗುರು ಸ್ವಾಮಿ ಪ್ರಾರ್ಥಿಸಿದರು.
ಫೌಂಡೇಶನ್ನ ಅಧ್ಯಕ್ಷ ಸಂತೋಷ್ ವಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.,
 ಮಹಿಳಾ ವಿಭಾಗದ ಕಾರ್ಯ ಧ್ಯಕ್ಷ  ಕವಿತಾ ಗೋಪಾಲ ಶೆಟ್ಟಿ ಸ್ವಾಗತಿಸಿದರು. ಉಪ ಕಾರ್ಯಧ್ಯಕ್ಷೆ ದಿವ್ಯಾ ಪದ್ಮನಾಭ್ ಶೆಟ್ಟಿ ಕ್ರಮವನ್ನು ನಿರೂಪಿಸಿದರು.

  ಈ ಸಂದರ್ಭದಲ್ಲಿ ಅಪ್ಪಾಜಿ ಬೀಡು ಫೌಂಡೇಶನ್  ಉಪ ಅಧ್ಯಕ್ಷ ಪದ್ಮನಾಭ ಶೆಟ್ಟಿ , ಕಾರ್ಯದರ್ಶಿ ಹರೀಶ್ ಶೆಟ್ಟಿ, ಕೋಶಧಿಕಾರಿ ಪ್ರಸಾದ್ ಶೆಟ್ಟಿ ಅರುವ,   ಸಲಹೆಗಾರರಾದ ಬೋಜ ಶೆಟ್ಟಿ ಕೇದಗೆ,ಉದಯ ಶೆಟ್ಟಿ ಮುದ್ರಾಡಿ, ಕಾಂತಾಡಿ ಗುತ್ತು ಅರುಣ್ ಆಳ್ವ , ಬಾಲಚಂದ್ರ ಶೆಟ್ಟಿ, ಪ್ರವೀಣ್ ಶೆಟ್ಟಿ  ಕುರ್ಕಾಲ್  ,  ಶೇಖರ್ ಶೆಟ್ಟಿ , ದಿನೇಶ್ ಕುಲಾಲ್, ರಾಜೇಶ್ ಶೆಟ್ಟಿ ಮುನಿಯಾಲ್, ವಿಜಯ ಶೆಟ್ಟಿ, ಪ್ರಸಾದ್ ಶೆಟ್ಟಿ ಕಡಂದಲೆ, ಸಂತೋಷ್  ಸಾಲಿಯಾನ್, ಮಹಿಳಾ ವಿಭಾಗದ ರೋಹಿಣಿ ಶೇಖರ್ ಪೂಜಾರಿ (ಕಾರ್ಯದರ್ಶಿ)
ಸುಜಾತಾ ನಾರಾಯಣ ಪುತ್ರನ್(ಜಂಟಿ ಕಾರ್ಯದರ್ಶಿ)
ಶೋಬಾ ವಿಜಯ್ ಶೆಟ್ಟಿ (ಕೋಶಾಧಿಕಾರಿ)
ನಿರ್ಮಲಾ ಕರುಣಾಕರ ಶೆಟ್ಟಿ (ಜಂಟಿ ಕೋಶಾಧಿಕಾರಿ)  ಸಮಿತಿಯ ಸದಸ್ಯರುಗಳಾಗಿ , ಪ್ರಮೀಳಾ ಜೆ ಶೆಟ್ಟಿ, ವಿನೋದ ಜೆ ಶೆಟ್ಟಿ, ರಮ್ಯ ಎಸ್ ಶೆಟ್ಟಿ. ರಮಾ ಶೆಟ್ಟಿ. ನಿಮ್ಮ ಆರ್ ಶೆಟ್ಟಿ. ಸಂಗೀತ ಡಿ ಶೆಟ್ಟಿ. ಉಷಾ ಬಿ ಶೆಟ್ಟಿ. ಯಶೋಧ ಶೆಟ್ಟಿ. ಸುಮಿತ್ರ ಪಿ  ಶೆಟ್ಟಿ. ಸುಪ್ರೀತಾ ಶೆಟ್ಟಿ. ಗೀತಾ ಜೆ ಶೆಟ್ಟಿ. ಪ್ರಜ್ಞ ಎಸ್ ಶೆಟ್ಟಿ. ಸರೋಜಿನಿ  ಕರ್ಕೇರ. ರಜನಿ ಆರ್ ಶೆಟ್ಟಿ. ಶರ್ಮಿಳಾ ಶೆಟ್ಟಿ. ವೀಣಾ ಎಂ ಹೆಡ್ಡೆ. ರಾಣಿ ಎ ಶೆಟ್ಟಿ. ಮಂಜುಳಾ ಆರ್ ಶೆಟ್ಟಿ. ಗೀತಾ ಆರ್ ಶೆಟ್ಟಿ. ಶೋಭಾ ಡಿ ರೈ. ಸಾವಿಲ್ಲ ಡಿ ಶೆಟ್ಟಿ. ವಿಜಯಶ್ರೀ ಶೆಟ್ಟಿ. ದಿನ ಸುವರ್ಣ. ಶಾರದಾ ಶೆಟ್ಟಿ. ಸಾರಿಕಾ ಶೆಟ್ಟಿ. ರತ್ನ ಕುಲಾಲ್. ಸುಗಂಧಿ ಶೆಟ್ಟಿ. ಯಶಸ್ವಿ ಶೆಟ್ಟಿ ಮತ್ತಿತರ ಸದಸ್ಯರು ಪಾಲ್ಗೊಂಡಿದ್ದರು.
 
 ಪಾಲ್ಗೊಂಡ ಎಲ್ಲರಿಗೂ ಮಹಿಳಾ ಸದಸ್ಯರದ ದಿವ್ಯಾ ಪಿ ಶೆಟ್ಟಿ,ಸುಜಾತಾ ಎನ್ ಪುತ್ರನ್,ಪ್ರಮೀಳಾ ಜೆ ಶೆಟ್ಟಿ,ಸಂಗೀತ ಶೆಟ್ಟಿ,ನಿರ್ಮಲ ಕೆ ಶೆಟ್ಟಿ,ಉಷಾ ಶೆಟ್ಟಿ,ವೀಣಾ ಹೆಗ್ಡೆ,ಕವಿತಾ ಜಿ ಶೆಟ್ಟಿ,ಶೋಭಾ ವಿ ಶೆಟ್ಟಿ, ಶಯ್ಲ ಶೆಟ್ಟಿ,
ಸರೋಜಿನಿ ಕರ್ಕೇರಾ,ಶಾರದಾ ಶೆಟ್ಟಿ,ರೋಹಿಣಿ ಎಸ್ ಪೂಜಾರಿ,ಯಶೋದ ಶೆಟ್ಟಿ,ನೀಮ ಆರ್ ಶೆಟ್ಟಿ,ಪ್ರಜ್ಞಾ ಎಸ್ ಶೆಟ್ಟಿ,ಶರ್ಮಿಳಾ ಶೆಟ್ಟಿ ಯವರೂ 
ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಪದಾರ್ಥಗಳ ಭೋಜನದ ಸವಿ ಉಣಿಸಿದರು.

Powered by Blogger.