".

Header Ads

ಅಭಿಮಾನಿ ಎಸೆದ ಹೂವಿನ ಮಾಲೆಯನ್ನು ಬಾಂಬ್‌ ಎಂದು ತಿಳಿದು ಓಡಿದ ದಳಪತಿ ವಿಜಯ್,ವಿಡಿಯೋ ವೈರಲ್‌

 ದಳಪತಿ ವಿಜಯ್‌ ಟಿವಿಕೆ ಪಕ್ಷ ಸ್ಥಾಪನೆ ಮಾಡಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಟಿವಿಕೆ ಪಕ್ಷ ಸ್ಥಾಪಿಸಿ ತಮಿಳುನಾಡು ಚುನಾವಣೆಯಲ್ಲಿ ನಿರಂತರವಾಗಿ ಪ್ರಚಾರ ಕಾರ್ಯದಲ್ಲಿ ಭಾಗಿ ಆಗುತ್ತಿದ್ದಾರೆ. ಅದೇ ರೀತಿ ದಳಪತಿ ವಿಜಯ್‌ ಅವರು ಸೈಕಲ್‌ ರೈಡ್‌ ಮಾಡಿದ್ದಾರೆ. ಈ ವೇಳೆ ಅಭಿಮಾನಿ ಎಸೆದ ಹೂವಿನ ಮಾಲೆಯನ್ನು ಬಾಂಬ್‌ ಎಂದು ಭಾವಿಸಿ ದಳಪತಿ ವಿಜಯ್‌ ಅವರು ಸ್ಥಳದಿಂದ ಓಡಿದ್ದಾರೆ. ಈ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌ ಆಗಿದೆ.


ಕನ್ಯಾಕುಮಾರಿಯಲ್ಲಿ ಚುನಾವಣಾ ಪ್ರಚಾರದಲ್ಲಿ ದಳಪತಿ ವಿಜಯ್‌ ಭಾಗಿ ಆಗಿದ್ದಾರೆ. ಹೈವೇಲಿ ಸೈಕಲ್‌ ರೈಡ್‌ ಮಾಡಿದರು. ಈ ಸಮಯದಲ್ಲಿ ಸಾಕಷ್ಟು ಅಭಿಮಾನಿಗಳು ಅವರ ಕಡೆಗೆ ನುಗ್ಗುವ ಪ್ರಯತ್ನ ಮಾಡಿದ್ದಾರೆ. ಇವರೆಲ್ಲರಿಂದ ತಪ್ಪಿಸಿಕೊಂಡು ವಿಜಯ್‌ ಅವರು ಸೈಕಲ್‌ ರೈಡ್‌ ಮಾಡುತ್ತಾ ತೆರಳುತ್ತಿದ್ದರು.ವಿಜಯ್‌ ಸೈಕಲ್‌ ರೈಡ್‌ ಮಾಡುವಾಗ ಅಲ್ಲಿದ್ದ ಅಭಿಮಾನಿಯೋರ್ವ ಹೂವಿನ ಮಾಲೆಯನ್ನು ತೆಗೆದುಕೊಂಡು ಬಂದು ಎಸೆಯುವ ಪ್ರಯತ್ನ ಮಾಡಿದ್ದು, ಇದನ್ನು ನೋಡಿ  ವಿಜಯ್‌ ಗಾಬರಿಗೊಂಡು ಅದು ಬಾಂಬ್‌ ಎಂದು ಭಾವಿಸಿ ಸೈಕಲ್‌ ಬಿಟ್ಟು ಓಡಿ ನೇರವಾಗಿ ಕಾರನ್ನು ಏರಿದ್ದಾರೆ.ಅಲ್ಲಿ ಸಾಕಷ್ಟು ಜನರು ಮುತ್ತಿಕೊಳ್ಳುವ ಸೂಚನೆ ಸಿಕ್ಕಿದ್ದರಿಂದ ಈ ರೀತಿ ಮಾಡಿರಬಹುದು’ ಎಂದು ಕೆಲವರು ಹೇಳಿದ್ದಾರೆ.



Powered by Blogger.