ಉಡುಪಿ: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಬಳಿ ಪರ್ಯಾಯ ಮಾರ್ಗ ಬಳಕೆಗೆ ಸೂಚನೆ.
ಉಡುಪಿ: ಇಂದ್ರಾಳಿ ರೈಲ್ವೇ ಮೇಲ್ಸೇ ತುವೆ ಬಳಿ ಬಾಕಿ ಇರುವ ಕಾಂಕ್ರೀಟ್ ಕಾಮಗಾರಿ ಭರದಿಂದ ನಡೆಯುತ್ತಿದ್ದು, ರೈಲ್ವೇ ಸೇತುವೆ ಮೂಲಕ ಭಾರೀ ವಾಹನ ಸಂಚಾರವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ವಾಹನಗಳ ಸಂಚಾರಕ್ಕೆ ಉಳಿದ ವಾಹನಗಳಿಗೆ ಅಡಚಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಇತರ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಕುಂದಾಪುರ ಕಡೆಯಿಂದ ಬರುವ ಘನವಾಹನಗಳು ಅಂಬಾಗಿಲು- ಪೆರಂಪಳ್ಳಿ- ಮಣಿಪಾಲ ರಸ್ತೆ ಮೂಲಕ ಚಲಿಸುವುದು.
ಉಡುಪಿಯಿಂದ ಬರುವ ಘನ ವಾಹನಗಳು ಕಲ್ಸಂಕ ಜಂಕ್ಷನ್ ಜಂಕ್ಷನ್ ಬಳಿ ಎಡಕ್ಕೆ ತಿರುವ ರಸ್ತೆ ಮೂಲಕ ಎ.ವಿ. ಬಾಳಿಗ ಆಸ್ಪತ್ರೆ ಬಳಿಯಿಂದ ಪೆರಂಪಳ್ಳಿ ರಸ್ತೆ ಮೂಲಕ ಮಣಿಪಾಲಕ್ಕೆ ಚಲಿಸುವುದು.
ಕಾರ್ಕಳ,
ಹಿರಿಯಡ್ಕದಿಂದ
ಬರುವ ಘನ
ವಾಹನಗಳು
ಮಣಿಪಾಲ-
ಪೆರಂಪಳ್ಳಿ-
ಅಂಬಾಗಿಲು
ರಸ್ತೆ ಮೂಲಕ ಮಣಿಪಾಲಕ್ಕೆ
ಚಲಿಸುವ
ದ್ವಿಚಕ್ರ
ವಾಹನ,
ಕಾರುಗಳು
ಮತ್ತು
ಬಸ್ಗಳು
ಹಾಲಿ
ಇಂದ್ರಾಳಿ
ಸೇತುವೆ
ಮೇಲೆ
ಏಕಮುಖ
ನಿರ್ಬಂಧಿತ
ರೀತಿಯಲ್ಲಿ
ಚಲಿಸುವಂತೆ
ಜಿಲ್ಲಾಧಿಕಾರಿ
ಕಚೇರಿ
ಪ್ರಕಟನೆ
ತಿಳಿಸಿದೆ.

Post a Comment