".

Header Ads

ಮುಂಬೈ :- ಪುಣೆಯ 7 ಮಂದಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌; ಸಂಬಂಧಿಗಳಿಂದಲೇ ಕೊಲೆ


ಪುಣೆ ಜಿಲ್ಲೆಯ ದೌಂಡ್ ಪಟ್ಟಣದ ನದಿಯಿಂದ ಒಂದೇ ಕುಟುಂಬದ 7 ಸದಸ್ಯರ ಮೃತದೇಹಗಳನ್ನು ಹೊರತೆಗೆಯಲಾಗಿದೆ
ಮೃತದೇಹಗಳ ಪತ್ತೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಸಾಮೂಹಿಕ ಆತ್ಮಹತ್ಯೆ ಎಂದೇ ಹೇಳಲಾಗಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಇದೊಂದು ಪೂರ್ವ ನಿಯೋಜಿತ ಕೊಲೆ ಎಂಬುದನ್ನು ಬಯಲಿಗೆಳೆದಿದ್ದಾರೆ.
.ಮೃತಪಟ್ಟವರ ಪೈಕಿ ಮೋಹನ್‌ ಉತ್ತಮ್‌ ಪವಾರ್‌ (45), ಸಂಗೀತಾ (40), ಶರ್ಮಾ ಪಂಡಿತ್‌ ಫುಲವಾರೆ (28), ರಾಣಿ ಫುಲಾವರೆ (24), ರಿತೇಶ್‌ (07), ಚೋಟು (05), ಕೃಷ್ಣ (03) ಎಂದು ಗುರುತಿಸಲಾಗಿದೆ. ಜನವರಿ 18ರಂದು ನದಿಯಲ್ಲಿ ಮೃತದೇಹ ತೇಲುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಅವತ್ತಿನಿಂದ ಜನವರಿ 22ರವರೆಗೆ ನಾಲ್ಕು ಮೃತದೇಹಗಳು ಪತ್ತೆಯಾಗಿದ್ದರೆ, ಮಂಗಳವಾರ ಮೂವರ ಮಕ್ಕಳ ಮೃತದೇಹಗಳು ಪತ್ತೆಯಾಗಿದ್ದವು.ಭೀಮಾ ನದಿಯಲ್ಲಿ 200 ರಿಂದ 300 ಮೀಟರ್‌ ದೂರದಲ್ಲಿ ಎಲ್ಲ ಮೃತದೇಹಗಳು ಸಿಕ್ಕಿವೆ.
 ಸಾಮೂಹಿಕ ಆತ್ಮಹತ್ಯೆ ಎಂಬ ಅನುಮಾನ ಎಲ್ಲರಲ್ಲೂ ಬಂದಿತ್ತು. ಆದರೆ, ಎಲ್ಲ ಆಯಾಮದಲ್ಲಿ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಆಘಾತಕಾರಿ ಮಾಹಿತಿ ಸಿಕ್ಕಿದ್ದು, ಇದೊಂದು ಯೋಜಿತ ಕೃತ್ಯ ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಮೃತಪಟ್ಟ 45 ವರ್ಷದ ವ್ಯಕ್ತಿಯ ಸೋದರ ಸಂಬಂಧಿಗಳೇ ಈ ಕೃತ್ಯ ಎಸಗಿದ್ದಾರೆ. ಯಾರಿಗೂ ಅನುಮಾನ ಬರಬಾರದು ಎಂದು ಎಲ್ಲರನ್ನೂ ಜನವರಿ 18ರಂದು ನದಿಗೆ ನೂಕಿ ಸಾಯಿಸಿದ್ದರು.ಈ ಬಗ್ಗೆ ಮಾಹಿತಿ ನೀಡಿರುವ ಪುಣೆ ಗ್ರಾಮೀಣ ಹೆಚ್ಚುವರಿ ಎಸ್‌ಪಿ ಆನಂದ್‌ ಬಾಟಿಯಾ, ಬಂಧಿತರ ಪೈಕಿ ಒಬ್ಬನ ಮಗ ಕೆಲ ತಿಂಗಳ ಹಿಂದೆ ಲೋನಿಕಾಂಡ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಅಪಘಾತದಲ್ಲಿ ಸಾವಿಗೀಡಾದ ಯುವಕನ ತಂದೆ ಇದು ಅಪಘಾತವಲ್ಲ, ತನ್ನ ಸೋದರ ಸಂಬಂಧಿ ಕೊಲೆ ಮಾಡಿರುವುದು ಎಂದು ಅನುಮಾನಿಸಿದ್ದ. ಈ ಹಿನ್ನೆಲೆ ಆತ ಮತ್ತು ಆತನ ಮೂರು ಜನ ಸಹೋದರರು ಸೇರಿ ಇಡೀ ಕುಟುಂಬವನ್ನೇ ಕೊಲೆ ಮಾಡಿದ್ದಾರೆ ಎಂದಿದ್ದಾರೆ ಸಾವಿಗೀಡಾದವರು  ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆ ಕುಟುಂಬದ ಹುಡುಗಿಯೊಬ್ಬಳು ಪ್ರಿಯತಮನ ಜೊತೆ ಓಡಿ ಹೋಗಿದ್ದು, ಆ ಅವಮಾನ ತಾಳಲಾರದೇ ಇಡೀ ಕುಟುಂಬ ಸಾವಿಗೆ ಶರಣಾಗಿತ್ತು ಎಂದು ಗ್ರಾಮಸ್ಥರು ಮಾತನಾಡಿಕೊಂಡಿದ್ದರು. ಆದರೆ, ಈಗ ಅದು ಸುಳ್ಳಾಗಿದ್ದು, ಸೋದರ ಸಂಬಂಧಿಗಳೇ ಇಡೀ ಕುಟುಂಬವನ್ನು ಹತ್ಯೆಗೈದಿದ್ದಾರೆ ಈಗ ತಿಳಿದುಬಂದಿದೆ.
Powered by Blogger.