ಫೆ. 21 ರಂದು ಡೊಂಬಿವಲಿಯ ಶ್ರೀ ಜಗದಂಬ ಮಂದಿರ ದಲ್ಲಿ ಹರಿಕೀರ್ತನ ಕಾರ್ಯಕ್ರಮ "ಸೀತಾ ಸ್ವಯಂವರ "
ಡೊಂಬಿವಲಿಯ ಗೋಪಿನಾಥ್ ಚೌಕ್ ಬಳಿಯ ಯಕ್ಷಕಲಾ ಸಂಸ್ಥೆ (ರಿ) ಸಂಚಾಲಿತ ಶ್ರೀ ಜಗದಂಬ ಮಂದಿರ, ಡೊಂಬಿವಲಿಯಲ್ಲಿ ಶ್ರೀ ವೈ ಅನಂತಪದ್ಮನಾಭ ಭಟ್ , ಕಾರ್ಕಳ ಇವರಿಂದ ಪುರಂದರ ದಾಸರ ಆರಾಧನೆಯ ಮಹೋತ್ಸವದ ನಿಮಿತ್ತ ಹರಿಕೀರ್ತನ ಕಾರ್ಯಕ್ರಮ "ಸೀತಾ ಸ್ವಯಂವರ " ಕಾರ್ಯಕ್ರಮವು ಮಂಗಳವಾರ ದಿನಾಂಕ 21-02-2023 ರಂದು ಸಂಜೆ 6 ಗಂಟೆಗೆ ಸರಿಯಾಗಿ ಮಂದಿರದ ವಠಾರದಲ್ಲಿ ಜರಗಲಿದೆ. ಈ ಕಾರ್ಯಕ್ರಮಕ್ಕೆ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ ಬೇಕಾಗಿ ಗೌರವ ಅಧ್ಯಕ್ಷರು , ಅಧ್ಯಕ್ಷರು , ಹಾಗು ಸರ್ವ ಸದಸ್ಯರು
ಶ್ರೀ ಜಗದಂಬ ಮಂದಿರ,
ಸಂಚಾಲಕರು : ಯಕ್ಷಕಲಾ ಸಂಸ್ಥೆಯ
ಪರವಾಗಿ ಗೌರವ ಪ್ರದಾನ ಕಾರ್ಯದರ್ಶಿ ರಾಜೇಶ್ ಕೋಟ್ಯಾನ್ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.


Post a Comment