".

Header Ads

ಒಕ್ಕೂಟದ ಸಮಾಜ ಕಲ್ಯಾಣ ಯೋಜನೆಯಡಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆಸಹಾಯ ಹಸ್ತ


ಮಂಗಳೂರು :ಜಾಗತಿಕ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರ ಕನಸಿನ ಯೋಜನೆ ಸಮಾಜ ಕಲ್ಯಾಣ ಯೋಜನೆಯಡಿ ಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ವಿಂದ್ಯಶ್ರೀ ರೈ ಪುತ್ತೂರು, ಸ್ಪರ್ಶ ಶೆಟ್ಟಿ ಬಿಜೈ ಮಂಗಳೂರು, ಪಾಲ್ಗುಣಿ ರೈ ಕದ್ರಿ ಮಂಗಳೂರು, ಅಶ್ವಿನ್ ಶೆಟ್ಟಿ ಕುಂದಾಪುರ, ಪೃಥ್ವಿ ರೈ ಪುತ್ತೂರು, ಆಶ್ರಯ್ ಶೆಟ್ಟಿ ಉಳ್ಳಾಲ, ದೀಕ್ಷಿತ್ ಶೆಟ್ಟಿ ಮೂಡಬಿದ್ರೆ, ರೇಷ್ಮಾ ಶೆಟ್ಟಿ ಕುಂದಾಪುರ, ಕ್ಷಮಾ ಶೆಟ್ಟಿ ಉಡುಪಿ, ವಿಜೇತ್ ಶೆಟ್ಟಿ ಮಂಗಳೂರು, ದಿವ್ಯ ಶೆಟ್ಟಿ ಮಂಗಳೂರು, ಶ್ರೀದೇವಿ ಶೆಟ್ಟಿ ಉಡುಪಿ, ದೀಕ್ಷಾ ಶೆಟ್ಟಿ ಕುಂದಾಪುರ, ಶ್ರೇಯ ಶೆಟ್ಟಿ ಕಾರ್ಕಳ, ತೇಜಸ್ ಶೆಟ್ಟಿ ಕಾರ್ಕಳ ಇವರಿಗೆ ವಿದ್ಯಾರ್ಥಿವೇತನದ ಚೆಕ್ಕನ್ನು ಒಕ್ಕೂಟದ ಕಚೇರಿಯಲ್ಲಿ ಹಸ್ತಾoತರಿಸಿದರು  ಈ ಸಂದರ್ಭದಲ್ಲಿ ಒಕ್ಕೂಟದ ಆಹ್ವಾನಿತ ಸದಸ್ಯರಾದ  ರವಿ ಶೆಟ್ಟಿ ಜತ್ತಬೆಟ್ಟು, ಮಾಜಿ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ಅವಿನಾಶ್ ಶೆಟ್ಟಿ ಕುಂದಾಪುರ, ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


ವಾಲ್ಪಡಿ ಗ್ರಾಮದ ಅಳಿಯೂರಿನ ನಿವಾಸಿ ಜಯ ಪೂಜಾರಿಯವರು ಕಿಡ್ನಿಯ ಸಮಸ್ಯೆಯಿಂದ ಬಳಲುತ್ತಿದ್ದು ಕೆಲಸ ಮಾಡಲು ಆಸಕ್ತರಾಗಿದ್ದು ಅವರ ಜೀವನ ತುಂಬಾ ಅಸಹಾಯಕ ಸ್ಥಿತಿಯಲ್ಲಿರುವುದನ್ನು ಮನಗಂಡು ಅವರ ವೈದ್ಯಕೀಯ ಚಿಕಿತ್ಸೆಗೆ ಧನಸಹಾಯದ ಚೆಕ್ಕನ್ನು ಪಲಾನುಭವಿಯ ಪತ್ನಿ ಸೀತಾ ಪೂಜಾರಿಯವರಿಗೆ ಒಕ್ಕೂಟದ ಕಚೇರಿಯಲ್ಲಿ ಹಸ್ತಾoತರಿಸಿದರು.
Powered by Blogger.