ಜಿಂಬಾಬ್ವೆಯಲ್ಲಿ ವಿಮಾನ ಸ್ಫೋಟ; ಭಾರತದ ಬಿಲಿಯನೇರ್ ಮಗ ದುರ್ಮರಣ
ನೈಋತ್ಯ ಜಿಂಬಾಬ್ವೆಯ ವಜ್ರದ ಗಣಿ ಬಳಿ ತಾಂತ್ರಿಕ ದೋಷದಿಂದ ಖಾಸಗಿ ವಿಮಾನವೊಂದು ಸ್ಫೋಟಗೊಂಡಿದ್ದು ಭಾರತೀಯ ಗಣಿ ಉದ್ಯಮಿ ಹರ್ಪಾಲ್ ರಾಂಧವಾ ಮತ್ತು ಅವರ ಮಗ ಸೇರಿದಂತೆ ಆರು ಜನ ದುರ್ಮರಣಕ್ಕೀಡಾಗಿದ್ದಾರೆ.
ಮಶಾವಾದ ಜವಾಮಹಂಡೆ ಪ್ರದೇಶದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಗಣಿ ಕಂಪನಿ 'ರಿಯೋಜಿಮ್' ಮಾಲೀಕ ಹರ್ಪಾಲ್ ರಾಂಧವಾ, ಅವರ ಮಗ 22 ವರ್ಷದ ಅಮೆರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ವೆಬ್ಸೈಟ್ ವರದಿ ಮಾಡಿದೆ. 'ರಿಯೋಜಿಮ್' ಚಿನ್ನ ಮತ್ತು ಕಲ್ಲಿದ್ದಲು ಉತ್ಪಾದಿಸುವ ಜೊತೆಗೆ ತಾಮ್ರವನ್ನು ಸಂಸ್ಕರಿಸುವ ಪ್ರಮುಖ ಗಣಿಗಾರಿಕೆ ಕಂಪನಿಯಾಗಿದೆ. ಜವಾಮಹಂಡೆಯ ಪೀಟರ್ ಫಾರ್ಮ್ನಲ್ಲಿ ಬೀಳುವ ಮೊದಲು, ವಿಮಾನವು ತಾಂತ್ರಿಕ ದೋಷವನ್ನು ಅನುಭವಿಸಿತು. ಈ ಕಾರಣದಿಂದಾಗಿ ಅದು ಬಹುಶಃ ಗಾಳಿಯಲ್ಲಿ ಸ್ಫೋಟಗೊಂಡಿದೆ. ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
.jpg)
Post a Comment