".

Header Ads

ಪಡುಬಿದ್ರಿ : ಶ್ರೀ ಆದಿಶಕ್ತಿ ಆದಿ ಮಹಾಮಾಯೆ, ಅಣ್ಣಪ್ಪ ಪಂಜುರ್ಲಿ, ಮಂತ್ರ ದೇವತೆ ಹಾಗೂ ಸ್ವಾಮಿ ಕೊರಗಜ್ಜ ಸನ್ನಿಧಿ


ಉಡುಪಿ ಜಿಲ್ಲೆಯಲ್ಲಿ ಸಾವಿರಾರು ವರ್ಷಗಳ  ಇತಿಹಾಸವಿರುವ ಶ್ರೀ ಆದಿಶಕ್ತಿ ಆದಿ ಮಹಾಮಾಯೆ, ಅಣ್ಣಪ್ಪ ಪಂಜುರ್ಲಿ, ಮಂತ್ರ ದೇವತೆ  ಹಾಗೂ ಸ್ವಾಮಿ ಕೊರಗಜ್ಜ ಸನ್ನಿಧಿ ಪಡುಬಿದ್ರಿ-ಉಡುಪಿ ಕ್ಷೇತ್ರದ ಸಮಿತಿಯ ವಿಜ್ಞಾಪನೆ ಪತ್ರ ಬಿಡುಗಡೆ ಹಾಗೂ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿರುವುದು.

ದಿನಾಂಕ 2022 ರ, ಶನಿವಾರ ಅ.22 ರಂದು  ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ವಿಜ್ಞಾಪನ ಪತ್ರ ಬಿಡುಗಡೆಗೊಳ್ಳಲಿರುವುದು.


ಬಳಿಕ ಸಂಜೆ 4 ಗಂಟೆಗೆ ಸರಿಯಾಗಿ ಜೀರ್ಣೋದ್ಧಾರ  ಸಮಿತಿ ಊರ ಪರವೂರ  ಭಕ್ತರ ಸಹಕಾರದಿಂದ ಸಾಮೂಹಿಕ   ಕೊರಗಜ್ಜ ದೈವದ ನೇಮೋತ್ಸವ ಜರಗಲಿರುವುದು.

ಈ ಪುಣ್ಯಕಾರ್ಯದಲ್ಲಿ ಊರ ಪರವೂರ  ಭಕ್ತರು ದೈವದ ಗಂಧ ಪ್ರಸಾದ ಪಡೆದು  ದೈವದ ಕೃಪೆಗೆ ಪಾತ್ರರಾಗಬೇಕಾಗಿ ಧರ್ಮದರ್ಶಿಗಳು ಹಾಗೂ ಜೀರ್ಣೋದ್ಧಾರ ಸಮಿತಿಯ ಸಂಚಾಲಕರು, ಗೌರವಾಧ್ಯಕ್ಷರು, ಅಧ್ಯಕ್ಷರು ಹಾಗೂ ಕಾರ್ಯಧ್ಯಕ್ಷರು  ಹಾಗೂ ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ.

Powered by Blogger.