ಶಾರುಖ್ ಖಾನ್ ಬದುಕಿದ್ದಾಗಲೇ ಅಂತಿಮ ವಿಧಿವಿಧಾನ ಮಾಡಿದ ಸ್ವಾಮೀಜಿ
ಅಯೋಧ್ಯೆಯ ಪರಮಹಂಸ ಆಚಾರ್ಯ ಅವರು ಹಾಡಿನ ವಿವಾದದ ಕುರಿತು ಮಾತನಾಡುವಾಗ ಶಾರುಖ್ ಖಾನ್ ವಿರುದ್ಧ ಗುಡುಗಿದ್ದರು.
ಈಗ ಅವರು ಮಡಿಕೆಗೆ ಶಾರುಖ್ ಖಾನ್ ಮುಖವನ್ನು ಅಂಟಿಸಿದ್ದಾರೆ. ಆ ಮಡಿಕೆಯನ್ನು ಒಡೆದು ಹಾಕಿದ್ದಾರೆ.ನಟನೆಯ ‘ಪಠಾಣ್’ ಚಿತ್ರದ ‘ಬೇಷರಂ ರಂಗ್ ಹಾಡು ಸಾಕಷ್ಟು ವಿವಾದ ಸೃಷ್ಟಿ ಮಾಡಿದೆ.
ಕೇಸರಿ ಬಣ್ಣದ ಬಿಕಿನಿ ಧರಿಸಿದ್ದರಿಂದ ಈ ಹಾಡಿಗೆ ವಿವಾದ ಅಂಟಿಕೊಂಡಿತು. ಸಿನಿಮಾ ಬ್ಯಾನ್ ಮಾಡಬೇಕು ಎಂದು ಅನೇಕರು ಬೊಬ್ಬೆಹೊಡೆದುಕೊಂಡಿದ್ದಾರೆ. ಅಯೋಧ್ಯೆಯ ಪರಮಹಂಸ ಸ್ವಾಮೀಜಿ ಅವರು ಇತ್ತೀಚೆಗೆ ಈ ಹಾಡಿನ ವಿವಾದಕ್ಕೆ ಸಂಬಂಧಿಸಿ ಶಾರುಖ್ ಖಾನ್ ಅವರನ್ನು ಜೀವಂತ ಸುಡುವ ಎಚ್ಚರಿಕೆ ನೀಡಿದ್ದರು. ಈಗ ಶಾರುಖ್ ಬದುಕಿದ್ದಾಗಲೇ ಅವರ ಅಂತಿಮ ವಿಧಿ-ವಿಧಾನಗಳನ್ನು ಭೋಪಾಲ್ನಲ್ಲಿ ಮಾಡಿ ಮುಗಿಸಿದ್ದಾರೆ

Post a Comment